ಆರಿ ಹೋದವು
ನೂರು ದೀವಿಗೆಗಳು
ಕೋಟಿ ಕಂಗಳ ಬೆಳಕ ಕಾಯಲು
ಕರಗಿ ಹೋದವು
ಸಾವಿರ ಆಸೆಗಳು
ಕೋಟಿ ಭಾವಗಳ ಒಂದು ಮಾಡಲು
ಕೋಟಿ ಪ್ರಣಾಮಗಳು
ಆ ಬೆಳಕ ಕಾಯ್ದ
ಉಕ್ಕು ಕೈಗಳಿಗೆ
ಅನಂತ ನಮನಗಳು
ಆ ಬೆಳಕಿಗುಸಿರು ಹೊಯ್ದ
ಅಮರ ಜೀವಗಳಿಗೆ
ಧಿಕ್ಕಾರವಿರಲಿ
ನಡೆದಾಡುವ ಪಿಶಾಚಗಳು
ಮಾನವರಾದುದಕ್ಕೆ
ಧಿಕ್ಕಾರವಿರಲಿ
ಅವ ಪೊರೆದು ತಾ ಬದುಕುವ
ರಕ್ತ ಪಿಪಾಸುಗಳಿಗೆ
ಇನ್ನಾದರೂ
ಮೇಲೇಳುವ
ಈ ಹಾಳು ನಿದ್ದೆ ಸಾಕು ಮಾಡಿ
ಅಲ್ಲಿರುವ ಸ್ವರ್ಗವ
ಭೂಮಿಗಿಳಿಸುವ
ಒಂದೇ ಸಂಕಲ್ಪ ಮಾಡಿ
—ಗಣೇಶ

